ಮೃತ್ಯು

ಪ್ರತಿದಿನ, ಪ್ರತಿಕ್ಷಣ
ಅದೇ ಕೆಲಸ;
ಹುಟ್ಟಿನ ಮನೆಗೆ
ಭೇಟಿ ಕೊಡುವುದು,
ಸಂಭ್ರಮದ ತುಣುಕನ್ನು
ಮೆದ್ದು, ತನ್ನದೊಂದು
ಬೀಜ ನೆಟ್ಟು, ಗುಟ್ಟಾಗಿ
ಓಡಿಬರುವುದು.
ಮತ್ತೆ ಅದೇ ಕೆಲಸ
ಕಾಯುವುದು
ನೆಟ್ಟ ಬೀಜ ಫಲಕೊಟ್ಟು
ಹಣ್ಣಾಗಿ ಕಳಚಿಕೊಳ್ಳುವುದನ್ನೇ
ಕಣ್ಣಾಗಿ ಕಾಯುವುದು.

ಮತ್ತೆ ಅದೇ ಕೆಲಸ
ಆಯುವುದು
ಕವಡೆ ಕಣ್ಣುಗಳನ್ನು
ನಾರುವ ಹುಣ್ಣುಗಳನ್ನು
ತಲೆಬುರುಡೆ, ಎದೆಗೂಡು
ಅಳಿದುಳಿದ ಹಾಡುಗಳನ್ನೂ
ಆಯುವುದು.

ನಿತ್ಯದ ಕೆಲಸದ ಮಧ್ಯೆ
ತುರ್ತಿನ ಕರೆ ಬಂದಲ್ಲಿ….
ಓಡಬೇಕು ಬಿರುಗಾಳಿಯಾಗಿ,
ಇಲ್ಲ. ಯಾವುದಾದರೊಂದು
ನದಿಯೊಳಗೆ ಅವಿತು
ಉಕ್ಕಬೇಕು ಪ್ರವಾಹವಾಗಿ
ಅಥವ ಉಲ್ಕೆಯಾಗಿ
ಉರಿದು ಕಲ್ಲುಗಳ
ಮಳೆಗರೆಯಬೇಕು.

ಒಮ್ಮೊಮ್ಮೆ ಅನಿಸುತ್ತೆ
ಎಲ್ಲ ಮರೆತು
ಎಲ್ಲಾದರೊಂದು ಕಡೆ
ದೂರ ಒಂಟಿಯಾಗಿ
ಮರುಭೂಮಿಯ ಹಾಗೆ
ನಿಂತು ಬಿಡಬೇಕೆಂದು.


Previous post ಅಜ್ಜಿ ಕಾಲಿಗೆ ದೀಪ*
Next post ಸ್ವಾತಂತ್ರ್ಯ- ಕನಸು ನನಸು

ಸಣ್ಣ ಕತೆ

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

cheap jordans|wholesale air max|wholesale jordans|wholesale jewelry|wholesale jerseys